
ಕಾಲ ಕಾಲದಲಿ ಅಡಗಿ ಹೋಗಿದೆ
ಕಾಲಾಂತರಂಗದ ವಿಷಯಗಳು
ಕಾಡಿ-ಬೇಡಿದರು ತಿಳಿಯದು ಸುಲಭದಿ
ಕಂಡು-ಕಾಣದ ತಾಣಗಳು
ಸೃಷ್ಟಿ ಏಕೆ?ಚರಾಚಾರಗಳೇಕೆ?
ಮೌನದಿ ಚೈತನ್ಯ ಸುಮ್ಮನಿರಲಿಲ್ಲ ಏಕೆ?
ಚೇತನದಗುಣ ಚೈತನ್ಯವೆ ಏಕೆ?
ಎಲ್ಲ ಪ್ರಶ್ನೆಗಳು ಪ್ರಶ್ನೆಗಳಾಗಿವೆ ಏಕೆ?
ತಿಳಿದವರು ತಿಳಿಸಲು ಕಷ್ಟ,
ತಿಳಿಯ ಬಯಸಿದಲ್ಲಿ ಅರಿಯಲು ಕಷ್ಟ
ತಿಳಿದ ಬರಿಯ - ಜ್ಞಾನ ಸಾಲದು
ತಿದ್ದಿ-ತೀಡುವ ಅನುಭವದಾಬಾವವೂ
No comments:
Post a Comment